ಗುರುವಾರ, ಜುಲೈ 28, 2011



ದಸರೆ ಉದ್ಘಾಟನೆಗೆ ಪೇಜಾವರ ಶ್ರೀ

ವಿಕ ಸುದ್ದಿಲೋಕ ಬೆಂಗಳೂರು
ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಉದ್ಘಾಟಿಸ ಲಿದ್ದಾರೆ.
ದಸರಾ ಸಿದ್ಧತೆ ಕುರಿತು ವಿಧಾನಸೌಧದಲ್ಲಿ ಸೋಮವಾರ ನಡೆದ ಉನ್ನತ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಈ ವಿಷಯ ಪ್ರಕಟಿಸಿದರು. ೮೦ ವರ್ಷ ಪೂರೈಸಿರುವ ಪೇಜಾವರ ಶ್ರೀಗೆ ಗೌರವ ಸೂಚಿಸುವ ಸಲುವಾಗಿ ದಸರಾ ಉದ್ಘಾಟಿಸಲು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಎಂದಿನಂತೆ ವಿಜೃಂಭಣೆಯಿಂದಲೇ ನಾಡಹಬ್ಬ ದಸರಾ ಆಚರಿಸಲು ಸಭೆ ನಿರ್ಧರಿಸಿತು. ಅಲ್ಲದೆ ಮೈಸೂರು ನಗರದ ಪ್ರಮುಖ ರಸ್ತೆಗಳ ಜತೆಗೆ ಒಳ ರಸ್ತೆಗಳ ಡಾಂಬರೀಕರಣ ನಡೆಸು ವುದು ಸೇರಿದಂತೆ ಸಿದ್ಧತೆಗಾಗಿ ಹತ್ತು ಕೋಟಿ ರೂ. ಬಿಡು ಗಡೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದರು. ಸಭೆ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಎಚ್.ಎಸ್. ಶಂಕರಲಿಂಗೇಗೌಡರು, ನಗರದ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಪ್ರಮುಖ ರಸ್ತೆಗಳನ್ನಷ್ಟೇ ಡಾಂಬರೀಕರಣ ಮಾಡಿದರೆ ಸಾಲದು, ಒಳರಸ್ತೆಗಳ ಗುಂಡಿ ಮುಚ್ಚಿ. ನಂತರ ದಸರಾ ಆಚರಣೆ ಮಾಡಿ ಎಂದರು.